ಯಕ್ಷಗಾನ ಕಲೆಗೆ ಹೋಲಿಕೆ ಇಲ್ಲ: ಕೃಷ್ಣರಾಯ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಜನವರಿ 6 , 2014
|
ಜನವರಿ 6, 2014
|
ಯಕ್ಷಗಾನ ಕಲೆಗೆ ಹೋಲಿಕೆ ಇಲ್ಲ: ಕೃಷ್ಣರಾಯ
ಸಿದ್ದಾಪುರ :
ಸಂಗೀತ, ನೃತ್ಯ, ಸಾಹಿತ್ಯವನ್ನೊಳಗೊಂಡ ಯಕ್ಷಗಾನ ಕಲೆಯನ್ನು ಇತರ ಕಲೆಗಳಿಗೆ ಹೋಲಿಸುವಂತಿಲ್ಲ. ಅಂತಹ ಕಲೆಯನ್ನು ಮನೆ-ಮನಗಳಲ್ಲಿ ರಕ್ಷಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಖ್ಯಾತ ಸಾಹಿತಿ ಶಾ.ಮಂ. ಕೃಷ್ಣರಾಯ ಹೇಳಿದರು.
ಯಕ್ಷಗಾನ ಕಲಾವಿದ,ಸಾಮಾಜಿಕ ಕಾರ್ಯಕರ್ತ ದಿ|ಮಹಾಬಲೇಶ್ವರ ಹೆಗಡೆ ಬಾಳೇಸರ ಅವರ ಸ್ಮರಣಾರ್ಥ ಏರ್ಪಡಿಸಲಾಗಿದ್ದ ಯಕ್ಷಗಾನ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿರಿಯರ ಸ್ಮರಣೆಯಲ್ಲಿ ಬಾಳೇಸರ ಕುಟುಂಬದವರು ನಡೆಸುತ್ತಿರುವ ಉಪಕ್ರಮ ಉತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಷಣ್ಮುಖ ಗೌಡರ್, ಲಯನ್ಸ ಮಾಜಿ ಜಿಲ್ಲಾ ಗವರ್ನರ್ ರವಿ ಹೆಗಡೆ ಹೂವಿನಮನೆ, ಸಿದ್ದಾಪುರ ಲಯನ್ಸ ಸಂಸ್ಥಾಪಕ ಅಧ್ಯಕ್ಷ ಡಾ|ಎಂ.ಪಿ.ಶೆಟ್ಟಿ, ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರ ಎಂ.ಎಸ್.ಜೋಶಿ ಶಿರಸಿ, ವೈದ್ಯ ಡಾ|ಕೆ. ಶ್ರೀಧರ ವೈದ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ನಾಗರಾಜ, ಚಾರ್ಟೆಡ್ ಅಕೌಂಟೆಂಟ್ ರಾಮಮೋಹನ ಹೆಗಡೆ ಅನಿಸಿಕೆ ವ್ಯಕ್ತಪಡಿಸಿದರು.
ಸನ್ಮಾನ: ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಯಕ್ಷಗಾನ ಅರ್ಥಧಾರಿ,ಪ್ರಸಂಗಕರ್ತ ಪೊÅ| ಎಂ.ಎ.ಹೆಗಡೆ, ಯಕ್ಷಗಾನ ಪೋಷಕ,ಕಲಾವಿದ ರಾಜಶೇಖರ ಹಂದೆ ಉಪ್ಪಿನಕುದ್ರು (ನೈಜೀರಿಯಾ), ಖ್ಯಾತ ಯಕ್ಷಗಾನ ಕಲಾವಿದ ಕೃಷ್ಣ ಯಾಜಿ ಬಳ್ಕೂರು, ಸಾಮಾಜಿಕ ಕಾರ್ಯಕರ್ತ ಎಂ.ಆರ್.ಹೆಗಡೆ ನೈಗಾರ, ನಿವೃತ್ತ ಪ್ರೌಢಶಾಲಾ ಮುಖ್ಯಾಧ್ಯಾಪಕ ಜಿ.ಜಿ.ಹೆಗಡೆ ಬಾಳಗೋಡ ಅವರನ್ನು ಸನ್ಮಾನಿಸಲಾಯಿತು.ದತ್ತಮೂರ್ತಿ ಭಟ್ ಅಭಿನಂದನಾ ನುಡಿಗಳನ್ನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಟಿಎಸ್ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೇಹಳ್ಳಿ ಮಾತನಾಡಿ, ತಂದೆಯವರ ಋಣ ತೀರಿಸುವ ಹಿನ್ನೆಲೆಯಲ್ಲಿ ಬಾಳೇಸರ ಕುಟುಂಬದವರು ನಡೆಸಿಕೊಡುತ್ತಿರುವ ಕಲಾ ಸೇವೆ,ಗಣ್ಯರ ಸನ್ಮಾನ ಸ್ವಾಗತಾರ್ಹ ಎಂದರು.
ಹಿರಿಯರಾದ ಎಂ.ಎಂ.ಹೆಗಡೆ ಹಾಗೂ ಕುಟುಂಬದ ಹಿರಿಯರು ಇದ್ದರು. ಆರ್.ಕೆ.ಹೊನ್ನೇಗುಂಡಿ ಪ್ರಾರ್ಥಿಸಿ,ನ್ಯಾಯವಾದಿ, ನೋಟರಿ ಆರ್.ಎಂ.ಹೆಗಡೆ ಬಾಳೇಸರ ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು. ನ್ಯಾಯವಾದಿ ಎಸ್.ಜಿ.ಹೆಗಡೆ ನಿರ್ವಹಿಸಿದರು. ಜಿ.ಎಂ.ಹೆಗಡೆ ಬಾಳೇಸರ ವಂದಿಸಿದರು. ನಂತರ ಘೇ ಆಂಜನೇಯ ಯಕ್ಷಮಿತ್ರ ಮಂಡಳಿ ಕೇಡಲಸರ ಹಾಗೂ ಖ್ಯಾತ ಕಲಾವಿದರಿಂದ ಶ್ರೀ ಕೃಷ್ಣ ಸಂಧಾನ ಯಕ್ಷಗಾನ ನಡೆಯಿತು.
ಕೃಪೆ :
http://www.kannada.yahoo.com
|
|
|